Slide
Slide
Slide
previous arrow
next arrow

ಫೆ.22ರಿಂದ ಶ್ರೀಅಂಬಾಭವಾನಿ ಮೂರ್ತಿ ಪುನರ್ ಪ್ರತಿಷ್ಠಾಪನೆ: ವರ್ಧಂತಿ ಉತ್ಸವ

300x250 AD

ದಾಂಡೇಲಿ : ನಗರದ ಬಸವೇಶ್ವರನಗರದಲ್ಲಿರುವ ಶ್ರೀ.ಅಂಬಾಭವಾನಿ ದೇವಸ್ಥಾನದಲ್ಲಿ ಮೂರ್ತಿ ಪುನರ್ ಪ್ರತಿಷ್ಠಾಪನೆ ಹಾಗೂ ವರ್ಧಂತಿ ಉತ್ಸವವನ್ನು ಫೆ.22 ರಿಂದ ಫೆ.25 ರವರೆಗೆ ಹಮ್ಮಿಕೊಳ್ಳಲಾಗಿದೆ.

ಫೆ.22 ರಂದು ಸಂಜೆ 4 ಗಂಟೆಗೆ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದಿಂದ ವಾದ್ಯ ಮೇಳಗಳ ಜೊತೆ ಅಂಬಾಭವಾನಿ ದೇವಸ್ಥಾನದ ಗೋಪುರದ ಕಳಸವನ್ನು‌ ಭವ್ಯ ಶೋಭಾಯಾತ್ರೆಯ‌ ಮೂಲಕ ತರಲಾಗುವುದು.

ಫೆ.23 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆಯವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳಾದ ಗಣ ಹೋಮ,ಫಲ ಪ್ರಾರ್ಥನೆ, ಗುರು ಪ್ರಾರ್ಥನೆ, ನವಗ್ರಹ ಪೂಜೆ, ನವಗ್ರಹ ದಾನ, ಮಹಾ ಸಂಕಲ್ಪ ಹಾಗೂ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.

ಫೆ.24 ರಂದು‌ ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗುವ ಪೂಜಾ ಕಾರ್ಯಕ್ರಮದಲ್ಲಿ‌ ಗುರುದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪ್ರತಿಷ್ಠಾ ದಿವಸ ಕರ್ಮಾಂಗ ಸುಲಗ್ನದಲ್ಲಿ ದೇವರ ಪ್ರತಿಷ್ಠೆ, ಪ್ರತಿಷ್ಠ ಕಲಶಾಭಿಷೇಕ , ಮಹಾಪೂಜೆ, ಪಂಚ ದುರ್ಗ ದೀಪ ಆರಾಧನೆ ಹಾಗೂ ಬ್ರಹ್ಮಕುಂಬ ಸ್ಥಾಪನೆ ಕಾರ್ಯ ನಡೆಯಲಿದೆ.

300x250 AD

ಫೆ: 25 ರಂದು ಬೆಳಿಗ್ಗೆ ಗುರು ಗಣಪತಿ ಪೂಜೆ ಹಾಗೂ ಮಹಾ ಚಂಡಿಕಾಯಾಗ ಮತ್ತು ಇನ್ನಿತರ ಹೋಮ ಹವನಗಳು ನಡೆಯಲಿದೆ. ಅಂದು ಮಧ್ಯಾಹ್ನ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ.

ಈ ಎಲ್ಲ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಅಂಬಾಭವಾನಿ ದೇವಿಯ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುವಂತೆ
ಶ್ರೀಅಂಬಾಭವಾನಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top